June 10, 2026

ಮಗುವಿಗೂ ತನ್ನದೇ ಆದ ಕಲಿಕೆ ಸಾಮರ್ಥ್ಯವಿದೆ. ಇತರ ಮಕ್ಕಳೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. ಹುಮನಾಬಾದ

ಮಗುವಿಗೂ ತನ್ನದೇ ಆದ ಕಲಿಕೆ ಸಾಮರ್ಥ್ಯವಿದೆ. ಇತರ ಮಕ್ಕಳೊಂದಿಗೆ ಹೋಲಿಸುವುದನ್ನು ನಿಲ್ಲಿಸಿ : ಎಳೆಯ ವಯಸ್ಸಿನಲ್ಲಿ ಮಕ್ಕಳ ಮೇಲೆ ಬಲವಂತದ ಶಿಕ್ಷಣದ ಹೊರೆ ಹಾಕಬೇಡಿ. ಇತರ ಮಕ್ಕಳೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. ಪ್ರತಿಯೊಂದು ಮಗುವಿಗೂ ತನ್ನದೇ ಆದ ವೇಗದಲ್ಲಿ ಕಲಿಯುವ ಸಾಮರ್ಥ್ಯವಿರುತ್ತದೆ. ಅಕ್ಷರ, ಪುಸ್ತಕಗಳಿಗಿಂತ ಹೆಚ್ಚಾಗಿ ಆಟ, ಪ್ರೀತಿ ಮತ್ತು ಪರಿಸರದ ಅನುಭವಗಳ ಅಗತ್ಯ ಎಂದು ಗಡವಂತಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಅಧ್ಯಕ್ಷ ಬಸವರಾಜ ಹೇಳಿದರು. ತಾಲೂಕಿನ ಮಾಣಿಕನಗರದ ಮಧುಮತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಾಯಂಕಾಲ ಮಾಣಿಕನಗರ ಗ್ರಾಮದ ಶ್ರೀಗುರು ಬಸವ ಸಮಿತಿಯಿಂದ ಆಯೋಜಿಸಿದ 1 ರಿಂದ 10 ನೇ ತರಗತಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಪೇನ್, ಪೆಂನ್ಸಿಲ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಹಿಂದಿನ ಕಾಲದಲ್ಲಿ ಬಾಲ್ಯವು ನಗುವಿನಿಂದ, ಆಟದಿಂದ 5ನೇ ತರಗತಿಯವರೆಗೆ ಕೇವಲ ಪಾಟಿ ಬಳಪ ಮೂಲಕ ಶಿಕ್ಷಣ ನೀಡಲಾಗುತ್ತಿತ್ತು. ಇದರಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತಿತ್ತು. ಇಂದಿನ ಆಧುನಿಕ ಮತ್ತು ತಂತ್ರಜ್ಞಾನ ಆಧಾರಿತ ಶಿಕ್ಷಣ ಪದ್ಧತಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಎಂದು ಹೇಳಿದ ಅವರು. ಗ್ರಾಮೀಣ ಭಾಗದ ಲಿಂಗಾಯತ ಸಮುದಾಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀಗುರು ಬಸವ ಸಮಿತಿ ಉಚಿತ ನೋಟ್ ಬುಕ್ ವಿತರಿಸುವ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು. ಗುಂಡಪ್ಪ ಹೆಚ್ ಕನಕಟ್ಟಕರ್ ಮಾತನಾಡಿ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಿಜಕ್ಕೂ ಪ್ರತಿಭಾವಂತರು, ಅವರಿಗೆ ಕಲಿಕೆಯಲ್ಲಿ ಪ್ರೋತ್ಸಾಹಿಸಬೇಕೆಂಬುದು ಸಮುದಾಯದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಗುಣಮಟ್ಟ ಶಿಕ್ಷಣ ದೊರೆತರೆ ಉತ್ತಮ ಪ್ರಜೆಗಳಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪಠ್ಯ ಸಾಮಾಗ್ರಿ ಉಚಿತವಾಗಿ ಹಂಚುವ ಯೋಜನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದ ಅವರು. ಮಕ್ಕಳು ಶಿಕ್ಷಣದಿಂದ ದೂರ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದು ಮಾತ್ರವಲ್ಲದೇ ಪೋಷಕರದ್ದು ಆಗಿದೆ ಎಂದರು. ಸಮಾಜದಲ್ಲಿ ಏಳಿಗೆ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸುಧಿರ್ಗ ಸೇವೆ ಸಲ್ಲಿಸಿದ ರಮೇಶ ಪವಾಡಶಟ್ಟಿ ಅವರಿಗೆ ವಿಷೇಶ ಸನ್ಮಾನಿಸಿ ಗೌರವಿಸಲಾಯಿತು. ಬಸವ ಸೇವಾ ಸಮಿತಿ ಅಧ್ಯಕ್ಷ ಪವನ ಶೇರಿಕಾರ ಉಪಾಧ್ಯಕ್ಷ ನಾಗರಾಜ ಭಾಲ್ಕಿಕರ, ಹಿರಿಯರಾದ ಹನುಮಂತಪ್ಪ ಸೂನಾತೆ, ವಕೀಲರಾದ ಅರವಿಂದ ಭಾಲ್ಕಿಕರ್, ವಿಜಯಾನಂದ ವಿಜಾಪೂರೆ, ಸುಭಾಷ ರಾವಬಾ, ಮಾಣಿಕರಾವ ಚಿಪ್ಪ, ರಮೇಶನಾಲ ಜಾಧವ, ಗುರುಪ್ಪ ವಿಭೂತಿ, ಧರ್ಮರಾಜ ಚೌದರಿ, ಸತ್ತಾರಸಾಬ್ ಮಾಣಿಕನಗರ, ಅಶೋಕ ಭಾಲ್ಕಿಕರ್, ಸಂಜಯ ಕುಡಂಬಲ ಸೇರಿದಂತೆ ಅನೇಕರಿದ್ದರು.

ಮಗುವಿಗೂ ತನ್ನದೇ ಆದ ಕಲಿಕೆ ಸಾಮರ್ಥ್ಯವಿದೆ. ಇತರ ಮಕ್ಕಳೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. – ಹುಮನಾಬಾದ : ಎಳೆಯ ವಯಸ್ಸಿನಲ್ಲಿ ಮಕ್ಕಳ ಮೇಲೆ ಬಲವಂತದ ಶಿಕ್ಷಣದ ಹೊರೆ ಹಾಕಬೇಡಿ. ಇತರ ಮಕ್ಕಳೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. ಪ್ರತಿಯೊಂದು ಮಗುವಿಗೂ ತನ್ನದೇ ಆದ ವೇಗದಲ್ಲಿ ಕಲಿಯುವ ಸಾಮರ್ಥ್ಯವಿರುತ್ತದೆ. ಅಕ್ಷರ, ಪುಸ್ತಕಗಳಿಗಿಂತ ಹೆಚ್ಚಾಗಿ ಆಟ, ಪ್ರೀತಿ ಮತ್ತು ಪರಿಸರದ ಅನುಭವಗಳ ಅಗತ್ಯ ಎಂದು ಗಡವಂತಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಅಧ್ಯಕ್ಷ ಬಸವರಾಜ ಹೇಳಿದರು.

ತಾಲೂಕಿನ ಮಾಣಿಕನಗರದ ಮಧುಮತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಾಯಂಕಾಲ ಮಾಣಿಕನಗರ ಗ್ರಾಮದ ಶ್ರೀಗುರು ಬಸವ ಸಮಿತಿಯಿಂದ ಆಯೋಜಿಸಿದ 1 ರಿಂದ 10 ನೇ ತರಗತಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಪೇನ್, ಪೆಂನ್ಸಿಲ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಹಿಂದಿನ ಕಾಲದಲ್ಲಿ ಬಾಲ್ಯವು ನಗುವಿನಿಂದ, ಆಟದಿಂದ 5ನೇ ತರಗತಿಯವರೆಗೆ ಕೇವಲ ಪಾಟಿ ಬಳಪ ಮೂಲಕ ಶಿಕ್ಷಣ ನೀಡಲಾಗುತ್ತಿತ್ತು. ಇದರಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತಿತ್ತು. ಇಂದಿನ ಆಧುನಿಕ ಮತ್ತು ತಂತ್ರಜ್ಞಾನ ಆಧಾರಿತ ಶಿಕ್ಷಣ ಪದ್ಧತಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಎಂದು ಹೇಳಿದ ಅವರು. ಗ್ರಾಮೀಣ ಭಾಗದ ಲಿಂಗಾಯತ ಸಮುದಾಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶ್ರೀಗುರು ಬಸವ ಸಮಿತಿ ಉಚಿತ ನೋಟ್ ಬುಕ್ ವಿತರಿಸುವ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಗುಂಡಪ್ಪ ಹೆಚ್ ಕನಕಟ್ಟಕರ್ ಮಾತನಾಡಿ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಿಜಕ್ಕೂ ಪ್ರತಿಭಾವಂತರು, ಅವರಿಗೆ ಕಲಿಕೆಯಲ್ಲಿ ಪ್ರೋತ್ಸಾಹಿಸಬೇಕೆಂಬುದು ಸಮುದಾಯದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಗುಣಮಟ್ಟ ಶಿಕ್ಷಣ ದೊರೆತರೆ ಉತ್ತಮ ಪ್ರಜೆಗಳಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪಠ್ಯ ಸಾಮಾಗ್ರಿ ಉಚಿತವಾಗಿ ಹಂಚುವ ಯೋಜನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದ ಅವರು. ಮಕ್ಕಳು ಶಿಕ್ಷಣದಿಂದ ದೂರ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದು ಮಾತ್ರವಲ್ಲದೇ ಪೋಷಕರದ್ದು ಆಗಿದೆ ಎಂದರು.

ಸಮಾಜದಲ್ಲಿ ಏಳಿಗೆ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸುಧಿರ್ಗ ಸೇವೆ ಸಲ್ಲಿಸಿದ ರಮೇಶ ಪವಾಡಶಟ್ಟಿ ಅವರಿಗೆ ವಿಷೇಶ ಸನ್ಮಾನಿಸಿ ಗೌರವಿಸಲಾಯಿತು.

ಬಸವ ಸೇವಾ ಸಮಿತಿ ಅಧ್ಯಕ್ಷ ಪವನ ಶೇರಿಕಾರ ಉಪಾಧ್ಯಕ್ಷ ನಾಗರಾಜ ಭಾಲ್ಕಿಕರ, ಹಿರಿಯರಾದ ಹನುಮಂತಪ್ಪ ಸೂನಾತೆ, ವಕೀಲರಾದ ಅರವಿಂದ ಭಾಲ್ಕಿಕರ್, ವಿಜಯಾನಂದ ವಿಜಾಪೂರೆ, ಸುಭಾಷ ರಾವಬಾ, ಮಾಣಿಕರಾವ ಚಿಪ್ಪ, ರಮೇಶನಾಲ ಜಾಧವ, ಗುರುಪ್ಪ ವಿಭೂತಿ, ಧರ್ಮರಾಜ ಚೌದರಿ, ಸತ್ತಾರಸಾಬ್ ಮಾಣಿಕನಗರ, ಅಶೋಕ ಭಾಲ್ಕಿಕರ್, ಸಂಜಯ ಕುಡಂಬಲ ಸೇರಿದಂತೆ ಅನೇಕರಿದ್ದರು.

BAJARANG TIWARI

District Reporter

Leave a Reply

Your email address will not be published. Required fields are marked *

INDIAN PRESS UNION

Indian Press Union (IPU) A National Platform for Journalists and Media Professionals.

© 2026 All Rights Reserved IPU MEDIA ASSOCIATION